ರುಕ್ಮಿಣಿ ಪಾರ್ವತಿ ಸಂವಾದ – Rukmini Parvati Samvada

ಜಲದಿ ನಲಯ ಗಾರ ಏತರ ಚೆಲುವ ರುಕ್ಮಿಣಿ |
ಬಿಳಿಯ ಮೈಯ ಬೂದಿ ಶಿವಗೆ ಒಲಿದೆ ಪಾರ್ವತಿ ||ಪ|
|
ಉದಕದೊಳಗೆ ವಾಸವೇಕೆ ಸದನವಿಲ್ಲವೆ |
ಸುದತಿ ಸುಡುಗಾಡಿಗಿಂತ ಲೇಸು ಅಲ್ಲವೆ ||1||
ಶೃಂಗ ಬೆನ್ನಲಿ ಪೂತ್ತವನ ಸುದ್ದಿಕೇಳಿದ್ಯಾ |
ಗಂಗೆ ಜಡೆಯಲಿಟ್ಟವನ ಗುರುವ ಕೇಳಿದ್ಯ||2||
ವಸುಧೆ ನೆಗಹಿ ಬೇರು ಮೆಲ್ಲಲುಅಶನವಿಲ್ಲವೆ |
ಹಸಿದು ವಿಷವ ನುಂಡುದೆಲ್ಲ ಹುಸಿಯು ಅಲ್ಲವೆ||3||
ಕೊರಳ ಕರುಳ ಮಾಲೆ ಯಾಕೆ ಸರವು ದೊರಕದೆ |
ರುಂಡಮಾಲೆ ಧರಿಸಿದವನು ಕಾಂತನಲ್ಲವೆ||4||
ವಸುಧಿಗೀಶನಾಗಿ ಬಲಿಯ ಬೇಡಲಿಲ್ಲವೆ|
ಎಸೆವ ಕಪಾಲ ಪಿಡಿದ ಕರ್ತನಲ್ಲವೆ||5||
ಮಾತೆ ಶಿರವ ತರಿದವನ ಮಾತು ಕೇಳಿದ್ಯಾ|
ತಾತನಾಗಿ ಸುತನ ಕೊಂದ ನೀತಿ ಕೇಳಿದ್ಯಾ¦|6||
ಕೋತಿಗಳನು ಕೂಡಲ್ಯಾಕೆ ಜಾತಿ ತನ್ನದೆ |
ಭೂತಗಣಗಳಾಳುವುದಕೆ ನೀತಿ ಪೇಳ್ವೆಲೆ||7||
ಕಂಜ ನೇತ್ರೆ ಹಾವುತುಳಿಯಲಂಜಿಕೆ ಬಾರದೇ|
ಮಂಜುಳ ವದನೆ ಮೈಯಲ್ಲ ಸರ್ಪ ಕುಂಜರ ಭೂಷಣಗೆ||8||
ಸುತ್ತಲಿದ್ದ ಸ್ತ್ರೀಯರೊಳು ಬತ್ತಲೆ ನಿಲುವರೆ |
ಉತ್ತಮರಾದ ಸ್ತ್ರೀಯರ ಶಾಪ ಹತ್ತಲಿಲ್ಲವೆ||9||
ಹತ್ತಲಿದ್ದ ವಾಜಿಯ ಬಿಟ್ಟು ಹದ್ದನೇರುವರೇ
ಎತ್ತಿನ ಬೆನ್ನೇರಿದವನು ಉತ್ತಮನಾಹನೆ||10||
ಹರಿಹರರೊಳು ಯಾರು ಶ್ರೇಷ್ಟಹೇಳೆ ರುಕ್ಮಿಣಿ|
ಪುರಂದರವಿಠಲ ಸರ್ವೋತ್ತಮನು ಕೇಳೆ ಪಾರ್ವತಿ ||11||