ಶ್ರೀ ಹರಿದಾಸ ದರ್ಶನ – Sri Haridasa darshana

” ಶ್ರೀ ಹರಿದಾಸ ಮಾರ್ಗದರ್ಶಿ “
[ ಕರ್ನಾಟಕ ಹರಿದಾಸ ಪರಂಪರೆ / ಪೀಳಿಗೆ ]

” ಪ್ರಸ್ತಾವನೆ “

ಹರಿದಾಸ ಸಾಹಿತ್ಯದ ಚೇತನವೇ ಆಗಿರುವ ದ್ವೈತ ದರ್ಶನದ ಪ್ರಮುಖ ತತ್ತ್ವಗಳನ್ನು [ ನವ ಪ್ರಮೇಯಗಳನ್ನು ] ಶ್ರೀಮದಾಚಾರ್ಯರು [ ಆನಂದತೀರ್ಥ ] – ಶ್ರೀ ನರಹರಿತೀರ್ಥರು [ ರಘುಪತಿ ] – ಶ್ರೀ ಜಯತೀರ್ಥರು [ ಶ್ರೀರಾಮ / ಶ್ರೀ ಜಯರಾಮ ] – ಶ್ರೀ ವಿಬುಧೇಂದ್ರತೀರ್ಥರು [ ಶ್ರೀ ವಿಬುಧೇಂದ್ರರಾಮ ] – ಶ್ರೀ ಶ್ರೀಪಾದರಾಜರು [ ರಂಗವಿಠಲ ] – ಶ್ರೀ ವ್ಯಾಸರಾಜರು [ ಸಿರಿಕೃಷ್ಣ / ಶ್ರೀಕೃಷ್ಣ ] – ಶ್ರೀ ಗೋವಿಂದ ಒಡೆಯರು [ ಶ್ರೀ ಗುರುಕೃಷ್ಣ ] – ಶ್ರೀ ವಾದಿರಾಜರು [ ಹಯವದನ ] – ಶ್ರೀ ವಿಜಯೀ೦ದ್ರತೀರ್ಥರು [ ಶ್ರೀ ವಿಜಯೀ೦ದ್ರರಾಮ ] – ಶ್ರೀ ರಾಘವೇಂದ್ರತೀರ್ಥರು [ ವೇಣುಗೋಪಾಲ ] – ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರುಗಳ ಶಿಷ್ಯ – ಪ್ರಶಿಷ್ಯರುಗಳು ಪ್ರತಿಪಾದಿಸಿದ್ದಾರೆ.

ಅವುಗಳೆಂದರೆ –

  1. ಹರಿಃ ಪರತರಃ = ಶ್ರೀ ಹರಿ ಸರ್ವೋತ್ತಮ
  2. ಸತ್ಯಂ ಜಗತ್ = ಜಗತ್ತು ಸತ್ಯವಾಗಿದೆ.
  3. ತತ್ತ್ವತೋ ಭೇದಃ = ಭೇದವು ಪಾರಮಾರ್ಥಿಕವಾಗಿದೆ.
  4. ಜೀವಗಣಾ ಹರೇರನುಚರಾ = ಸಮಸ್ತ ಜೀವರಾಶಿಯೂ ಶ್ರೀ ಹರಿಯ ಅಧೀನ.
  5. ನೀಚೋಚ್ಛ ಭಾವಂಗತಾ = ಸಮಸ್ತ ಜೀವರಾಶಿಗಳೂ ತಾರತಮ್ಯಯುಕ್ತವಾದುದು.
  6. ಮುಕ್ತಿ: ನೈಜ ಸುಖಾನುಭೂತಿ = ಆತ್ಮನ ನಿಜವಾದ ಸುಖಾನುಭವವೇ ಮುಕ್ತಿ
  7. ಅಮಲಾ ಭಕ್ತಿ: ತತ್ ಸಾಧನಂ = ನಿರ್ಮಲ ಭಕ್ತಿಯೇ ಮುಕ್ತಿಗೆ ಸಾಧನೆ
  8. ಅಕ್ಷಾದಿ ತ್ರಿತಯಂ ಪ್ರಮಾಣಂ = ಪ್ರತ್ಯಕ್ಷಾದಿ ಮೂರು ಪ್ರಮಾಣಗಳು
  9. ಅಖಿಲಾಮ್ನಾಯೈಕ ವೇದ್ಯೋ ಹರಿಃ = ಶ್ರೀ ಹರಿಯು ಅನಂತ ವೇದ ಪ್ರತಿಪಾದ್ಯ

ಇವೆ ನವ ಪ್ರಮೇಯಗಳು – ದ್ವೈತ ಸಿದ್ಧಾಂತದ ನವ ಪ್ರಮೇಯಗಳಲ್ಲಿ ಒಂದಾಗಿ – ಅತ್ಯಂತ ಮಹತ್ವವನ್ನು ಪಡೆದು – ಎಲ್ಲಾ ಹರಿದಾಸರು ಉಸಿರೇ ಆದ –

” ಹರಿ ಸರ್ವೋತ್ತಮತ್ವ ” ವು ಎಲ್ಲಾ ಕೀರ್ತನೆಗಳಲ್ಲಿಯೂ ಪ್ರತಿಪಾದಿತವಾಗಿರುವುದನ್ನು ಕಾಣಬಹುದು.

ಆ ದರ್ಶನದ ಇತರ ತತ್ತ್ವಗಳೆಲ್ಲವೂ ಶ್ರೀ ಹರಿ ಸರ್ವೋತ್ತಮತ್ವಕ್ಕೆ ಪೂರಕ – ಪೋಷಕ ಹಾಗೂ ಪ್ರತಿಪಾದಗಳೆಂದಾಗ ಈ ತತ್ತ್ವದ ಮಹತ್ವ ಅರಿವಾಗುತ್ತದೆ.

ಈ ದ್ವೈತ ದರ್ಶನದ ಸಿದ್ಧಾಂತಗಳನ್ನು ಎಲ್ಲಾ ಹರಿದಾಸರು ಅತ್ಯಂತ ಸರಳವಾಗಿ – ಅಷ್ಟೇ ದೃಢವಾಗಿ ತಮ್ಮ ಕೃತಿಗಳಲ್ಲಿ ತಂದಿದ್ದಾರೆ.

ಹರಿದಾಸರ ಕೀರ್ತನೆಗಳಲ್ಲಿ ಹರಿಸರ್ವೋತ್ತಮ – ಜೀವರಾಶಿ ಶ್ರೀ ಹರಿಯ ಅಧೀನ – ತಾರತಮ್ಯ – ಪಂಚಭೇದ – ನಿರ್ಮಲ ಭಕ್ತಿ – ಶ್ರೀ ಹರಿ ಅನಂತ ವೇದಗಳಿಂದ ಪ್ರತಿಪಾದ್ಯ – ಈ ತತ್ತ್ವಗಳು ನಿರೂಪಿತವಾಗಿರುವುದನ್ನು ಅರಿಯಬಹುದು.

ಹರಿದಾಸರಲ್ಲಿ ಕಂಡು ಬರುವ ಶ್ರೀ ಹರಿಸರ್ವೋತ್ತಮತ್ವದ ಬಗೆಗಿನ ಈ ಒಲವು ತತ್ವಕ್ಕಿಲ್ಲ ಅಥವಾ ಅನುಷಂಗಿಕವಾಗಿರದೆ ಅದು ಆಳವಾದ ಶ್ರದ್ಧೆ ಹಾಗೂ ಅಚಲವಾದ ನಿಷ್ಠೆಗಳ ನಿಲುವಾಗಿದೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ಇಲ್ಲಿ ಏಕದೇವ ನಿಷ್ಠೆ ಬಲಿಷ್ಠವಾಗಿದ್ದರೂ ಕೂಡಾ ಈ ನಿಷ್ಠೆ ಅನ್ಯ ದೇವತೆಗಳ ಅವಹೇಳನದಲ್ಲಿ ಪರ್ಯವಸಾನವಾಗುವುದಿಲ್ಲ ಎಂಬುದು ಮಹತ್ವದ ಅಂಶ.

ಶ್ರೀ ಮಧ್ವ ಸಂಪ್ರದಾಯದಲ್ಲಿ ದೇವತಾ ತಾರತಮ್ಯದ ಕಲ್ಪನೆ ಇರುವುದರಿಂದ ಅನ್ಯ ದೇವತೆಗಳ ನಿಂದೆಗೆ ಅವಕಾಶವಿಲ್ಲ ಎನ್ನಬಹುದು.

ಅಂತೆಯೇ ತಾರತಮ್ಯಕ್ಕೆ ಅನುಗುಣವಾಗಿ –

ಶ್ರೀ ವಾಯು – ಶ್ರೀ ಲಕ್ಷ್ಮೀ – ಶ್ರೀ ಸರಸ್ವತೀ – ಶ್ರೀ ಭಾರತೀ – ಶ್ರೀ ಶಿವ – ಶ್ರೀಪಾರ್ವತಿ – ಶ್ರೀ ಗಣಪತಿ ಮೊದಲಾದ ಎಲ್ಲ ದೇವತೆಗಳೂ ಸ್ತುತಿಸಲ್ಪಟ್ಟಿದ್ದಾರೆ.

ದ್ವೈತ ಸಿದ್ಧಾಂತದ ಘೋಷಣೆಯ ವಾಕ್ಯವಾದ –

” ಶ್ರೀ ಹರಿ ಸರ್ವೋತ್ತಮ – ಶ್ರೀ ವಾಯು ಜೀವೋತ್ತಮ ” ವು

ಎಲ್ಲ ಹರಿದಾಸರ ಧೋರಣೆಯಾಗಿದೆ.

ಶ್ರೀ ಕೃಷ್ಣ ಪರಮಾತ್ಮನ ಜ್ಯೇಷ್ಠ ಪುತ್ರರಾದ ಶ್ರೀ ವಾಯುದೇವರು ತ್ರೇತೆಯಲ್ಲಿ ” ಶ್ರೀ ಹನೂಮಂತ ” ರಾಗಿಯೂ – ದ್ವಾಪದಲ್ಲಿ ” ಶ್ರೀ ಭೀಮಸೇನ ” ರಾಗಿಯೂ – ಈ ಕಲಿಯುಗದಲ್ಲಿ ” ಶ್ರೀ ಮಧ್ವರಾಗಿ ಅವತರಿಸಿ ಶ್ರೀ ಕೃಷ್ಣ ಪರಮಾತ್ಮನ ಸೇವೆಗೈದರು ಎಂಬ ಶ್ರೀ ಮಧ್ವರ ನಂಬಿಕೆಯನ್ನು ಶ್ರೀ ಮಹಿಪತಿದಾಸರು –
ಪ್ರಥಮಲ್ಯಾದೆ ಹನುಮ ।
ದ್ವಿತೀಯಲ್ಯಾದೆ ಭೀಮ ।
ತೃತೀಯೆಲ್ಯಾದೆ ಪೂರ್ಣ –
ಪ್ರಜ್ಞ ನೆನಿಸಿದ ನಿಸ್ಸೀಮ ।।

ಎಂದು ನೆನಿಪಿಸಿದ್ದಾರೆ – ಇದರಂತೆ ಸಂಕ್ಷಿಪ್ತವಾಗಿ – ವಿಸ್ತಾರವಾಗಿ – ಇಡಿಯಾಗಿ – ಬಿಡಿಯಾಗಿ ವಿವಿಧ ರೀತಿಯಿಂದ ಈ ಅವತಾರತ್ರಯದ ವರ್ಣನೆ ಎಲ್ಲಾ ಹರಿದಾಸರಲ್ಲಿಯೂ ಕಂಡು ಬರುತ್ತದೆ.

ಹರಿದಾಸರ ಕೃತಿಗಳಲ್ಲಿ ಕಂಡು ಬರುವ ವಿವಧ ಪ್ರಕಾರಗಳು –

  1. ಕೀರ್ತನೆ
  2. ಉಗಾಭೋಗ
  3. ಸುಳಾದಿ
  4. ವೃತ್ತನಾಮ
  5. ಜಾವಳಿ
  6. ರಗಳೆ
  7. ದಂಡಕ
  8. ಮುಂಡಿಗೆ
  9. ಬಯಲಾಟ
  10. ಲಾವಣಿ
  11. ಕೋಲುಪದ
  12. ಗೀ ಗೀ ಪದ
  13. ಷಟ್ಪದಿ
  14. ಶ್ರೀ ಮಹಿದಾಸ ಶ್ರೀ ಕೃಷ್ಣ ಪರಮಾತ್ಮ

ಶ್ರೀ ಮಹಿದಾಸರು ಶ್ರೀ ಇತಿರಾದೇವಿಯರಲ್ಲಿ ಅವತಾರ – ಇವರು ಶ್ರೀ ಮಹಾಲಕ್ಷ್ಮೀದೇವಿಯರೂ ಹಾಗೂ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೆ ದಾಸತ್ವ ಬೋಧಕರು.

” ಪ್ರಥಮ ಘಟ್ಟದ ಹರಿದಾಸರು “

  1. ಶ್ರೀಮನ್ಮಧ್ವಾಚಾರ್ಯರು

ಜನ್ಮ ಸ್ಥಳ : ಶ್ರೀ ಪಾಜಕ ಕ್ಷೇತ್ರ / ಶಿವಳ್ಳಿ

ತಂದೆ – ಶ್ರೀ ಮಧ್ಯಗೇಹ ಭಟ್ಟರು
ಕಾಲ : ಕ್ರಿ ಶ 1238 – 1317
” ಉಪದೇಶ ಗುರುಗಳು “
ಜಗನ್ನಾಥನೂ – ಜಗದೊಡೆಯನೂ – ಸರ್ವತಂತ್ರ ಸ್ವತಂತ್ರನೂ – ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕನಾದ ಶ್ರೀಮನ್ವೇದವ್ಯಾಸದೇವರು
ಅಂಕಿತ : “ಆನಂದತೀರ್ಥ “

  1. ಶ್ರೀ ನರಹರಿ ತೀರ್ಥರು

ಹೆಸರು : ಶ್ರೀ ಶ್ಯಾಮಶಾಸ್ತ್ರಿಗಳು
ತಂದೆ : ಶ್ರೀ ನರಸಿಂಹ ಶಾಸ್ತ್ರಿಗಳು
ಜನ್ಮ ಸ್ಥಳ : ಗಂಜಾಂ [ ಶ್ರೀಕಾಕುಳಂ ಜಿಲ್ಲೆ – ಆಧ್ರಪ್ರದೇಶ
ಕಾಲ : ಕ್ರಿ ಶ 1324 – 1333
ಕನ್ನಡ ಪದಗಳು : ೩

  1. ಶ್ರೀ ಜಯತೀರ್ಥರು

ಹೆಸರು : ಶ್ರೀ ರಘುನಾಥನಾಯಕ / ಧೋ೦ಡೋಪಂಥ
ಕಾಲ : ಕ್ರಿ ಶ 1365 – 1388
ಉಪದೇಶ ಗುರುಗಳು :
ಶ್ರೀ ಹರಿ ಪ್ರಸಾದಾಂಕಿತ ” ಶ್ರೀರಾಮ / ಶ್ರೀ ಜಯರಾಮ
ಕನ್ನಡ ಪದ – 1

  1. , ಶ್ರೀ ವಿಬುಧೇಂದ್ರತೀರ್ಥರು

ಹೆಸರು : ಶ್ರೀ ರಘುನಾಥ ಭಟ್ಟರು
ಕಾಲ : ಕ್ರಿ ಶ 1435 – 1490
ಗುರುಗಳು : ಶ್ರೀ ರಾಮಚಂದ್ರತೀರ್ಥರು
ಅಂಕಿತ : ವಿಬುಧರಾಮ / ವಿಬುಧೇಂದ್ರರಾಮ
ಪದ – 2 & ಉಗಾಭೋಗ – 2

  1. ಶ್ರೀ ಶ್ರೀಪಾದರಾಜರು
    ಹೆಸರು : ಶ್ರೀ ಲಕ್ಷ್ಮೀನಾರಾಯಣ
    ಜನ್ಮ ಸ್ಥಳ : ಅಬ್ಬೂರು
    ಕಾಲ : ಕ್ರಿ ಶ 1406 – 1504
    ” ಅಂಕಿತ “
    ಶ್ರೀ ಪ್ರಸಾದಾಂಕಿತ ” ರಂಗವಿಠಲ “
    ಕನ್ನಡದಲ್ಲಿ – :
    ಪದಗಳು – 133
    ಸುಳಾದಿ : 3
    ದಂಡಕ – 1
    ಭ್ರಮರಗೀತೆ – 1
    ಉಗಾಭೋಗ – 16

ಒಟ್ಟು- 154 ಎಲ್ಲವೂ 2001 ರಲ್ಲಿ ಅಚ್ಚು ಆಗಿದೆ. ಡಾ. ವರದರಾಜ ಮೈಸೂರು ಮುದ್ರಣ ಮಾಡಿಸಿದ್ದಾರೆ.

  1. ಶ್ರೀ ವ್ಯಾಸರಾಜ ಗುರುಸಾರ್ವಭೌಮರು
    ಹೆಸರು : ಶ್ರೀ ಯತಿರಾಜ
    ಜನ್ಮ ಸ್ಥಳ : ಬನ್ನೂರು
    ಕಾಲ : 1447 – 1539
    ಪದ : 250
    ಉಗಾಭೋಗ : 15
    ಸುಳಾದಿ – 13

ಒಟ್ಟು – 278 ಎಲ್ಲವೂ ಮೈಸೂರುನಿಂದ ಮುದ್ರಿತ ಆಗಿದೆ.

  1. ಶ್ರೀ ವಾದಿರಾಜ ಗುರುಸಾರ್ವಭೌಮರು
    ಹೆಸರು : ಶ್ರೀ ಭೂವರಾಹ
    ಜನ್ಮ ಸ್ಥಳ : ಹೂವಿನಕೆರೆ
    ಕಾಲ : 1480 – 1600
    ಪದ : 329
    ಉಗಾಭೋಗ : 25
    ಸುಳಾದಿ – 13

ಒಟ್ಟು 367 ಎಲ್ಲವೂ ಅಚ್ಚು ಆಗಿವೆ.

  1. ಶ್ರೀ ವಿಜಯೀ೦ದ್ರತೀರ್ಥರು
    ಹೆಸರು : ಶ್ರೀ ವಿಠ್ಠಲಾಚಾರ್ಯರು
    ಕಾಲ : 1517 – 1614
    ಅಂಕಿತ :
    ಶ್ರೀ ಹರಿ ಪ್ರಸಾದಾಂಕಿತ ” ವಿಜಯೀ೦ದ್ರರಾಮ “
    ಪದ : 4
    ಸುಳಾದಿ – 3
  2. ಶ್ರೀ ಗೋವಿಂದ ಒಡೆಯರು
    ಕಾಲ : ಕ್ರಿ ಶ 1450 – 1535
    ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಗಳು
    ಅಂಕಿತ : ಗುರುಕೃಷ್ಣ
    ಪದ – 1
  3. ಶ್ರೀ ಪುರಂದರದಾಸರು
    ಹೆಸರು : ಶ್ರೀನಿವಾಸ ನಾಯಕ
    ಜನ್ಮ ಸ್ಥಳ : ಪುರಂದರಗಡ
    ಕಾಲ : ಕ್ರಿ ಶ 1484 – 1564
    ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು
    ಅಂಕಿತ : ಪುರಂದರವಿಠ್ಠಲರು
    ಒಟ್ಟು : 475000
    ಪದ – 1656
    ಸುಳಾದಿ – 60
    ಉಗಾಭೋಗ – 450

ಈವರೆಗೂ ಶ್ರೀ ಪುರಂದರ ದಾಸರ ಪದಗಳು 2166 ಸಿಕ್ಕಿದೆ ಎಲ್ಲವೂ 1958 ರಲ್ಲಿ ಮುದ್ರಿತ ಆಗಿದೆ.

  1. ಸಾಧ್ವೀ ಸರಸ್ವತೀ ಬಾಯಿ
    ಇವರು ಶ್ರೀ ಪುರಂದರದಾಸರ ಪತ್ನಿ
    ಕಾಲ : ಕ್ರಿ ಶ 1495 – 1555
    ಉಪದೇಶ ಗುರುಗಳು : ಶ್ರೀ ಪುರಂದರದಾಸರು
    ಅಂಕಿತ : ನಿಜ ಪುರಂದರವಿಠ್ಠಲ
    ಪದ – 10
    ಉಗಾಭೋಗ – 5
  2. ಶ್ರೀ ವರದಪ್ಪ [ ವೆಂಕಟೇಶ ] / ಶ್ರೀ ಪರಶು ಭಾಗವತ
    ತಂದೆ : ಶ್ರೀ ಪುರಂದರದಾಸರು
    ಜನ್ಮ ಸ್ಥಳ : ಪುರಂದರಗಡ
    ಕಾಲ : ಕ್ರಿ ಶ 1501 – 1575
    ಕಾರ್ಯ ಕ್ಷೇತ್ರ : ಹಂಪಿ
    ಉಪದೇಶ ಗುರುಗಳು : ಶ್ರೀ ಪುರಂದರ ವಿಠ್ಠಲ
    ಅಂಕಿತ : ವರದ ಪುರಂದರವಿಠ್ಠಲ
    ಪದ – 22
    ಉಗಾಭೋಗ – 10
    ಸುಳಾದಿ – 5
  3. ಶ್ರೀ ಗುರುರಾಯನಾಯಕ
    [ ಶ್ರೀ ಅಪ್ಪಣ್ಣ ಭಾಗವತ ]
    ತಂದೆ : ಶ್ರೀ ಪುರಂದರದಾಸರು
    ಜನ್ಮ ಸ್ಥಳ : ಪುರಂದರಗಡ
    ಕಾಲ : ಕ್ರಿ ಶ 1503 – 1573
    ಕಾರ್ಯ ಕ್ಷೇತ್ರ : ಹಂಪಿ
    ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
    ಅಂಕಿತ : ಗುರು ಪುರಂದರವಿಠ್ಠಲ
    ಪದ – 32
    ಸುಳಾದಿ – 17
    ಉಗಾಭೋಗ – 12
  4. ಶ್ರೀ ಅಭಿನವ ನಾಯಕ
    ತಂದೆ ಶ್ರೀ ಪುರಂದರದಾಸರು
    ಜನ್ಮ ಸ್ಥಳ : ಪುರಂದರಗಡ
    ಕಾಲ : ಕ್ರಿ ಶ 1505 – 1580
    ಕಾರ್ಯ ಕ್ಷೇತ್ರ : ಹಂಪಿ
    ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
    ಅಂಕಿತ : ಅಭಿನವ ಪುರಂದರವಿಠ್ಠಲ
    ಪದ – 4
    ಸುಳಾದಿ – 1
    ಉಗಾಭೋಗ – 1
  5. ಶ್ರೀ ಮಧ್ವಪತಿ ನಾಯಕ
    ತಂದೆ : ಶ್ರೀ ಪುರಂದರದಾಸರು
    ಜನ್ಮ ಸ್ಥಳ : ಪುರಂದರಗಡ
    ಕಾಲ : ಕ್ರಿ ಶ 1510 – 1592
    ಕಾರ್ಯ ಕ್ಷೇತ್ರ : ಹಂಪಿ
    ಉಪದೇಶ ಗುರುಗಳು : ಶ್ರೀ ಪುರಂದರವಿಠ್ಠಲ
    ಅಂಕಿತ : ಗುರು ಮಧ್ವಪತಿ ವಿಠ್ಠಲ
    ಪದ – 10
    ಸುಳಾದಿ – 7
    ಉಗಾಭೋಗ – 12
  6. ಸಾಧ್ವೀ ರುಕ್ಮಿಣೀಬಾಯಿ
    ತಂದೆ : ಶ್ರೀ ಪುರಂದರದಾಸರು
    ಕಾಲ : ಕ್ರಿ ಶ 1508 – 1588
    ಪಡದೇಶ ಗುರುಗಳು : ಶ್ರೀ ಪುರಂದರದಾಸರು
    ಅಂಕಿತ : ತಂದೆ ಪುರಂದರ ವಿಠ್ಠಲ
    ಪದ – 5
  7. ಶ್ರೀ ಕನಕದಾಸರು
    ಹೆಸರು : ಶ್ರೀ ತಿಮ್ಮಪ್ಪ
    ಜನ್ಮ ಸ್ಥಳ : ಬಾಡ
    ಕಾಲ : ಕ್ರಿ ಶ 1508 – 1608
    ಉಪದೇಶ ಗುರುಗಳು : ಶ್ರೀ ವ್ಯಾಸರಾಜ ಗುರುಸಾರ್ವಭೌಮರು
    ಅಂಕಿತ : ಆದಿಕೇಶವ / ಬಾಡದಾದಿಕೇಶವ
    ಕನ್ನಡ ಗ್ರಂಥಗಳು – 6
    ಪದ – 532
    ಸುಳಾದಿ – 1
    ಉಗಾಭೋಗ – 20
    ದಂಡಕಗಳು – 7
    ಮುಂಡಿಗೆಗಳು – 25
  8. ಶ್ರೀ ಚೆನ್ನ ಕೇಶವ
    ತಂದೆ : ಶ್ರೀ ಕನಕದಾಸರು
    ಕಾಲ : ಕ್ರಿ ಶ 1530 – 1620
    ಉಪದೇಶ ಗುರುಗಳು : ಶ್ರೀ ಕನಕದಾಸರು
    ಅಂಕಿತ : ಚನ್ನಕೇಶವ
    ಪದ – 2
    ಸುಳಾದಿ – 2
    ಉಗಾಭೋಗ – 2
  9. ಶ್ರೀ ವರದ ಕೇಶವ
    ತಂದೆ : ಶ್ರೀ ನಕದಾಸರು
    ಕಾಲ : ಕ್ರಿ ಶ 1535 – 1625
    ಉಪದೇಶ ಗುರುಗಳು : ಶ್ರೀ ಕನಕದಾಸರು
    ಅಂಕಿತ : ಗುರು ವರದ ಕೇಶವ
    ಸುಳಾದಿ – ೨
    ಉಗಾಭೋಗ – ೨
  10. ಶ್ರೀ ಬೇಲಾಪುರ ವೈಕುಂಠದಾಸರು
    ಜನ್ಮ ಸ್ಥಳ : ಬೇಲಾಪುರ
    ಕ್ರಿ ಶ : 1480 – 1550
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವೈಕುಂಠ ವಿಠ್ಠಲ
    ಪದ – 14
    ಸುಳಾದಿ – 3
  11. ಶ್ರೀ ನವಸಾಲ್ಪುರಿ ತಿಮ್ಮಣ್ಣಾಚಾರ್ಯರು
    ಜನ್ಮ ಸ್ಥಳ : ಕದಿರಿ
    ಕಾಲ : ಕ್ರಿ ಶ 1415 – 1500
    ಉಪದೇಶ ಗುರುಗಳು :
    ಸಾಕ್ಷಾತ್ಶ್ರೀ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರೂ ಹಾಗೂ ಶ್ರೀ ರಾಯರ ಮಠದ ಪೂರ್ವೀಕ ಗುರುಗಳಾದ ಶ್ರೀ ವಿಬುಧೇಂದ್ರ ತೀರ್ಥರು .
    ಅಂಕಿತ : ಖಾದ್ರಿ ನರಸಿಂಹ
    ಪದ – 150
    ಸುಳಾದಿ – 15
    ಹನುಮದ್ವಿಲಾಸ, ಸುಧಾಮ ಚರಿತ್ರೆ ಹಾಗೂ ಕಾಳಿಂಗಮರ್ದನ ದೀರ್ಘ ಕೃತಿಗಳು
  12. ಶ್ರೀ ಸಿಕಾರಪುರ ನಾರಾಯಣಪ ಕೋಳಿವಾಡ
    ಜನ್ಮ ಸ್ಥಳ : ಕೋಳಿವಾಡ
    ಕಾಲ : ಕ್ರಿ ಶ 1380 – 1446
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ : ಗದುಗಿನ ವೀರ ನಾರಾಯಣ [ ಕುಮಾರವ್ಯಾಸ ]
    ಗ್ರಂಥ : ಕರ್ನಾಟಕ ಭಾರತ ಕಥಾಮಂಜರೀ
  13. ಶ್ರೀ ರಾಘವೇಂದ್ರತೀರ್ಥರು
    ಜನ್ಮ ಸ್ಥಳ : ಕುಮಾರಪಟ್ಟಣಂ
    ಕಾಲ : ಕ್ರಿ ಶ 1595 – 1671
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ – ” ವೇಣುಗೋಪಾಲ
    ಪದ – 1
    ಸುಳಾದಿ – 1
  14. ಶ್ರೀ ಯೋಗೀ೦ದ್ರತೀರ್ಥರು
    ಕಾಲ : ಕ್ರಿ ಶ 1671 – 1688
    ಉಪದೇಶ ಗುರುಗಳು : ಶ್ರೀ ರಾಘವೇಂದ್ರತೀರ್ಥರು
    ಅಂಕಿತ : ಶ್ರೀ ರಾಮ / ಶ್ರೀ ಮೂಲರಾಮ
    ಪದ – 2
  15. ಶ್ರೀ ವಾದೀಂದ್ರ ತೀರ್ಥರು
    ಕಾಲ : ಕ್ರಿ ಶ 1728 – 1750
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವಾದೀಂದ್ರರಾಮ “
    ಪದ – 2
  16. ಶ್ರೀ ವರದೇಂದ್ರತೀರ್ಥರು
    ಕಾಲ : ಕ್ರಿ ಶ 1762 – 1785
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ವರದೇಂದ್ರಯತಿ “
    ಪದ – 1
  17. ಶ್ರೀ ವೇದವೇದ್ಯತೀರ್ಥರು
    ಕಾಲ : ಕ್ರಿ ಶ 1530 – 1616
    ಉಪದೇಶ ಗುರುಗಳು : ಶ್ರೀ ವಾದಿರಾಜ ತೀರ್ಥರು
    ಅಂಕಿತ : ಇಮ್ಮಡಿ ವಾದಿರಾಜ
    ಪದ – 31
  18. ಶ್ರೀ ವೇದನಿಧಿತೀರ್ಥರು
    ಕಾಲ : ಕ್ರಿ ಶ
    ಉಪದೇಶ ಗುರುಗಳು : ಶ್ರೀ ವಾದಿರಾಜ ತೀರ್ಥರು
    ಅಂಕಿತ : ಶ್ರೀಕೃಷ್ಣ
    ಪದ – 1
  19. ಶ್ರೀ ವಾದಿವಂದ್ಯ ತೀರ್ಥರು
    ಕಾಲ : ಕ್ರಿ ಶ 1666 – 1706
    ಉಪದೇಶ ಗುರುಗಳು : ವೇದನಿಧಿತೀರ್ಥರು
    ಅಂಕಿತ : ವಾದಿವಂದ್ಯ
    ಪದ – 1
  20. ಶ್ರೀ ಮಹಿಪತಿದಾಸರು
    ಜನ್ಮ ಸ್ಥಳ : ಕಾಖಂಡಕಿ
    ಕಾಲ :ಕ್ರಿ ಶ 1611 – 1681
    ಅಂಕಿತ : ಶ್ರೀ ಮಹಿಪತಿ / ಮಹಿಪತಿವಿಠ್ಠಲ
    ಪದ – 150 ಕ್ಕೂ ಅಧಿಕ
    ಮುಂಡಿಗಿ – 5
  21. ಶ್ರೀ ದಾಸಪ್ಪದಾಸರು
    ಜನ್ಮಸ್ಥಳ : ಚೀಕಲಪರವಿ
    ಕಾಲ : 1682 – 1755
    ಅಂಕಿತ : ಶ್ರೀ ಪುರಂದರದಾಸರ ಸ್ವಪ್ನಾಂಕಿತ ” ವಿಜಯವಿಠ್ಠಲ “
    ಪದ – ಪದ್ಯ – ಸುಳಾದಿ – ಉಗಾಭೋಗ ಎಲ್ಲಾ ಸೇರಿ ಒಟ್ಟು : 25000
  22. ಶ್ರೀ ವೇದವೇದ್ಯಾತೀರ್ಥರು – ಸೋದೆ ಶ್ರೀ ವಾದಿರಾಜ ಮಠ
    ಕಾಲ : 1530 – 1616
    ಉಪದೇಶ ಗುರುಗಳು : ಶ್ರೀ ವಾದಿರಾಜರು
    ಅಂಕಿತ : ಇಮ್ಮಡಿ ವಾದಿರಾಜ
    ಪದ – 30
  23. ಶ್ರೀ ವೇದನಿಧಿತೀರ್ಥರು .- ಸೋದೆ ಶ್ರೀ ವಾದಿರಾಜ ಮಠ
    ಕಾಲ :
    ಉಪದೇಶ ಗುರುಗಳು : ಶ್ರೀ ವಾದರಾಜರು
    ಅಂಕಿತ : ಶ್ರೀ ಕೃಷ್ಣ
    ಪದ – 1
  24. ಶ್ರೀ ವಾದಿವಂದ್ಯತೀರ್ಥರು
    ಕಾಲ : ಕ್ರಿ ಶ 1666 – 1706
    ಉಪದೇಶ ಗುರುಗಳು : ಶ್ರೀ ವೇದವೇದ್ಯಾತೀರ್ಥರು
    ಅಂಕಿತ : ಶ್ರೀ ವಾದಿವಂದ್ಯ
  25. ಶ್ರೀ ರಘುನಾಥ ತೀರ್ಥರು [ ಶ್ರೀ ಶೇಷಚಂದ್ರಿಕಾಚಾರ್ಯರು ] ಶ್ರೀ ವ್ಯಾಸರಾಜ ಮಠ
    ಕಾಲ : ಕ್ರಿ ಶ 1700 – 1755
    ಅಂಕಿತ : ಶ್ರೀ ಹರಿಪ್ರಸಾದಾಂಕಿತ ” ರಘುನಾಥಯತಿ / ರಘುನಾಥ ಕೃಷ್ಣ
    ಪದ : 1

36. ಶ್ರೀ ಲಕ್ಷ್ಮೀಕಾಂತ ತೀರ್ಥರು – ಶ್ರೀ ವ್ಯಾಸರಾಜ ಮಠ
ಕಾಲ : ಕ್ರಿ ಶ 1584 – 1594
ಅಂಕಿತ : ಶ್ರೀಕಾಂತ
ಪದ – 5
.

  1. ಶ್ರೀ ವ್ಯಾಸತತ್ತ್ವಜ್ಞತೀರ್ಥರು
    ಕಾಲ :
    ಉಪದೇಶ ಗುರುಗಳು : ಶ್ರೀ ಮುಖ್ಯಪ್ರಾಣದೇವರು
    ಅಂಕಿತ : ವಾಸುದೇವ ವಿಠ್ಠಲ
    ಪದ –
    ಸುಳಾದಿ –
    ಉಗಾಭೋಗ :
  2. ಶ್ರೀ ವಿದ್ಯಾರತ್ನಾಕರತೀರ್ಥರು – ಶ್ರೀ ವ್ಯಾಸರಾಜ ಮಠ
    ಕಾಲ : ಕ್ರಿ ಶ 1906 – 1915
    ಅಂಕಿತ : ಶ್ರೀ ಹರಿ ಪ್ರಸಾದಾಂಕಿತ ” ನಾಮಗಿರೀಶ “
    ಪದ –
  3. ಶ್ರೀ ವಿಶ್ವೇಂದ್ರ ತೀರ್ಥರು – ಸೋದೆ ಶ್ರೀ ವಾದಿರಾಜ ಮಠ
    ಕಾಲ : ಕ್ರಿ ಶ 1881 – 1943
    ಅಂಕಿತ : ರಾಜೇಶ ಹಯಮುಖ
    ಪದ –
  4. ಶ್ರೀ ಪ್ರದ್ಯುಮ್ನತೀರ್ಥರು – ಶ್ರೀ ಸಾಗರಕಟ್ಟೆ ಮಠ – ಮೈಸೂರು.
    ಕಾಲ : ಕ್ರಿ ಶ 1890 – 1975
    ಅಂಕಿತ : ನರಹರಿ
    ಪದ –
  5. ಶ್ರೀ ಸುಯಮೀ೦ದ್ರತೀರ್ಥರು
    ಕಾಲ : ಕ್ರಿ ಶ
    ಅಂಕಿತ : ಶ್ರೀ ರಾಘವೇಂದ್ರತೀರ್ಥ ಸ್ವಪ್ನಾಂಕಿತ ” ಶ್ರೀನಿವಾಸ “
    ಪದ – 2 [ ಶ್ರೀ ರಾಘವೇಂದ್ರ ಸ್ತುತಿ ಮತ್ತು ಶ್ರೀ ಶ್ರೀನಿವಾಸ ಸ್ತುತಿ ]
  6. ಶ್ರೀ ವಿದ್ಯಾಪ್ರಸನ್ನ ತೀರ್ಥರು
    ಕಾಲ : ಕ್ರಿ ಶ 1940 – 1969
    ಅಂಕಿತ : ಪ್ರಸನ್ನ
    ಪದ : –
    ಲಾವಣಿ –
    ಸಂಸ್ಕೃತ ಪದ –
  7. ಶ್ರೀ ವಿದ್ಯಾ ಪಯೋನಿಧಿ ತೀರ್ಥರು
    ಕಾಲ : ಕ್ರಿ ಶ 1969 – 1997
    ಅಂಕಿತ : ಪಯೋನಿಧಿ
    ಪದ – 5
  8. ಶ್ರೀ ವಿದ್ಯಾ ವಾಚಸ್ಪತಿ ತೀರ್ಥರು
    ಕಾಲ : ಕ್ರಿ ಶ 1997 – 2007
    ಅಂಕಿತ : ಶ್ರೀ ಕೃಷ್ಣಾ
    ಪದ – 2
  9. ಕಾಖಂಡಕಿ ಶ್ರೀ ಕೃಷ್ಣರಾಯರು
    ಕಾಲ : 1641 – 1729
    ಉಪದೇಶ ಗುರುಗಳು : ಶ್ರೀ ಮಹಿಪತಿದಾಸರು
    ಅಂಕಿತ : ತಂದೆ ಮಹಿಪತಿ / ಗುರು ಮಹಿಪತಿ
    ಪದ – ಪದ್ಯ – ಮುಂಡಿಗೆ ಸೇರಿ ಒಟ್ಟು –

46. ಶ್ರೀ ವೆಂಕಣ್ಣ
ಕಾಲ : ಕ್ರಿ ಶ 1680 – 1755
ಉಪದೇಶ ಗುರುಗಳು : ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸದೇವರು
ಅಂಕಿತ : ಪ್ರಸನ್ವೆಂಕಟ
ಪದ – ಪದ್ಯ –

  1. ಶ್ರೀ ಭಾಗಣ್ಣದಾಸರು
    ಕಾಲ : ಕ್ರಿ ಶ 1722 – 1762
    ಉಪದೇಶ ಗುರುಗಳು : ಶ್ರೀ ವಿಜಯದಾಸರು
    ಅಂಕಿತ : ಗೋಪಾಲವಿಠ್ಠಲ [ ಪೂರ್ವದಲ್ಲಿ – ವೆಂಕಟಕೃಷ್ಣ ]
    ಪದ – ಪದ್ಯ – ಸುಳಾದಿ – ವೃತ್ತನಾಮ ಸೇರಿ ಒಟ್ಟು – 332
  2. ಶ್ರೀ ಮೋಹನ
    ಕಾಲ : ಕ್ರಿ ಶ
    ಉಪದೇಶ ಗುರುಗಳು ” ಶ್ರೀ ವಿಜಯದಾಸರು
    ಅಂಕಿತ : ಮೋಹನವಿಠ್ಠಲ
    ಪದ – ಪದ್ಯ – ಸುಳಾದಿ ಸೇರಿ ಒಟ್ಟು –
  3. ಶ್ರೀ ಪಂಗನಾಮದ ತಿಮ್ಮಣ್ಣದಾಸರು
    ಕಾಲ : ಕ್ರಿ ಶ
    ಉಪದೇಶ ಗುರುಗಳು : ಶ್ರೀ ವಿಜಯದಾಸರು
    ಅಂಕಿತ : ವೇಣುಗೋಪಾಲವಿಠ್ಠಲ
    ಪದ – ಪದ್ಯ – ಸುಳಾದಿ ಒಟ್ಟು ಸೇರಿ –

50.ಶ್ರೀ ಬೇಲೂರು ಶ್ರೀ ವೆಂಕಟೇಶ ದಾಸರು
ಕಾಲ : ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯವಿಠ್ಠಲ
ಅಂಕಿತ : ವೆಂಕಟಾವಿಠ್ಠಲ
ಪದ –

  1. ಶ್ರೀ ಹೊನ್ನಾಳಿ ವೆಂಕಪ್ಪಾಚಾರ್ಯರು
    ಕಾಲ : ಕ್ರಿ ಶ
    ಉಪದೇಶ ಗುರುಗಳು : ಶ್ರೀ ವಿಜಯದಾಸರು
    ಅಂಕಿತ : ವೆಂಕಟಾವಿಠ್ಠಲ
    ಪದ –

52.ಶ್ರೀ ಮೀನಪ್ಪದಾಸರು
ಕಾಲ :ಕ್ರಿ ಶ
ಉಪದೇಶ ಗುರುಗಳು : ಶ್ರೀ ವಿಜಯದಾಸರು
ಅಂಕಿತ : ಮುದ್ದುವಿಠ್ಠಲ
ಪದ –

  1. ಶ್ರೀ ಕೂಡ್ಲಿ ಮಧ್ವಾಚಾರ್ಯರು
    ಕಾಲ : ಕ್ರಿ ಶ
    ಉಪದೇಶ ಗುರುಗಳು : ವಿಜಯವಿಠ್ಠಲ
    ಅಂಕಿತ : ಗುರು ಮಧ್ವೇಶ ವಿಠ್ಠಲ
    ಪದ – 26
  2. ಶ್ರೀ ಶೇಷಗಿರಿದಾಸರು
    ಕಾಲ : ಕ್ರಿ ಶ
    ಉಪದೇಶ ಗುರುಗಳು : ಶ್ರೀ ವಿಜಯದಾಸರು
    ಅಂಕಿತ : ಶ್ರೀ ಹಯಗ್ರೀವ ವಿಠ್ಠಲ
    ಪದ – 1

” ಹರಿದಾಸ ಮಾರ್ಗದರ್ಶಿ – 2 “

  1. ಶ್ರೀ ಸುಬ್ಬಣ್ಣಾಚಾರ್ಯರು
    ಕಾಲ : ಕ್ರಿ ಶ 1800 – 1875
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ಶ್ರೀ ಗೋಪತಿವಿಠ್ಠಲ
    ಪದ : 5
  2. ಶ್ರೀ ಶೀನಪ್ಪ ದಾಸರು
    ಕಾಲ : ಕ್ರಿ ಶ 1724 – 1800
    ಜನ್ಮಸ್ಥಳ : ಮೊಸರಕಲ್ಲು
    ಉಪದೇಶ ಗುರುಗಳು : ಶ್ರೀ ಗೋಪಾಲದಾಸರು
    ಅಂಕಿತ : – ಶ್ರೀ ಗುರುಗೋಪಾಲವಿಠ್ಠಲ
    ಪದ – 75
    ಸುಳಾದಿ : 5
    ಉಗಾಭೋಗ :30
  3. ಶ್ರೀ ದಾಸಪ್ಪದಾಸರು
    ಕಾಲ : ಕ್ರಿ ಶ 1726 – 1795
    ಜನ್ಮಸ್ಥಳ : ಮೊಸರಕಲ್ಲು
    ಉಪದೇಶ ಗುರುಗಳು : ಶ್ರೀ ಗೋಪಾಲವಿಠ್ಠಲ
    ಅಂಕಿತ : ಶ್ರೀ ವರದ ಗೋಪಾಲವಿಠ್ಠಲ –
    ಪದ – 138
    ಸುಳಾದಿ – 30
    ಉಗಾಭೋಗ : 25

4 ಶ್ರೀ ಶ್ರೀನಿವಾಸಾಚಾರ್ಯರು
ಕಾಲ : ಕ್ರಿ ಶ 1728 – 1809
ಜನ್ಮಸ್ಥಳ : ಬ್ಯಾಗವಾಟ
ಅಂಕಿತ : ಶ್ರೀ ಹರಿಪ್ರಸಾದಾಂಕಿತ ” ಜಗನ್ನಾಥವಿಠ್ಠಲ “
ಪದ -225
ಸುಳಾದಿ :15
ಉಗಾಭೋಗ : ೧೦

  1. ಶ್ರೀ ಯೋಗೀ೦ದ್ರರಾಯರು –
    ಕಾಲ : ಕ್ರಿ ಶ 1736 – 1822
    ಜನ್ಮಸ್ಥಳ : ಲಿಂಗಸೂಗೂರು
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿಂತ : ಶ್ರೀ ಪ್ರಾಣೇಶ ವಿಠ್ಠಲ
    ಪದ : 270
    ಸುಳಾದಿ : 3
    ಉಗಾಭೋಗ : 8
  2. ಶ್ರೀ ಕರ್ಜಗಿ ದಾಸಪ್ಪನವರು
    ಕಾಲ : ಕ್ರಿ ಶ 1740 – 1820
    ಜನ್ಮ ಸ್ಥಳ : ಕರ್ಜಗಿ
    ಉಅದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ಶ್ರೀ ಶ್ರೀದ ವಿಠ್ಠಲ
    ಪದ – 114
    ಸುಳಾದಿ – 2
    ಹರಿಕಥಾಮೃತಸಾರ ಫಲ ಶ್ರುತಿ
  3. ಶ್ರೀಶ್ರೀ ರಂಗಪ್ಪದಾಸರು
    ಕಾಲ : ಕ್ರಿ ಶ 1730 – 1820
    ಜನ್ಮ ಸ್ಥಳ : ಮೊಸರುಕಲ್ಲು
    ಉಪದೇಶ ಗುರುಗಳು : ಶ್ರೀ ಗೋಪಾಲವಿಠ್ಠಲ
    ಅಂಕಿತ : ಶ್ರೀ ತಂದೆ ಗೋಪಾಲವಿಠ್ಠಲ
    ಪದ : 25
    ಸುಳಾದಿ : 4
    ಶ್ರೀ ಗೋಪಾಲದಾಸರ ಚರಿತ್ರೆಯ ದೀರ್ಘ ಕೃತಿ
  4. ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು
    ಕಾಲ : ಕ್ರಿ ಶ :
    ಜನ್ಮ ಸ್ಥಳ : ಕಲ್ಲೂರು
    ಉಪದೇಶ ಗುರುಗಳು :
    ಶ್ರೀ ವೇಣುಗೋಪಾಲದಾಸರು [ ಪಂಗನಾಮದ ತಿಮ್ಮಣ್ಣದಾಸರು ]
    ಅಂಕಿತ : ಶ್ರೀ ವ್ಯಾಸವಿಠ್ಠಲ
    ಪದ –
    ಸುಳಾದಿ –
  5. ಶ್ರೀ ಹುಂಡೇಕಾರ ದಾಸಪ್ಪ ದಾಸರು
    ಕ್ರಿ ಶ : 1735 – 1800
    ಜನ್ಮ ಸ್ಥಳ : ಹುಕ್ಕೇರಿ
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ಶ್ರೀ ಶ್ರೀಶವಿಠ್ಠಲ
    ಪದ – 21
    ಸುಳಾದಿ – 2
  6. ಶ್ರೀ ಬೂದಿನ್ನಿ ನಾರಾಯಣಪ್ಪ
    ಕಾಲ : ಕ್ರಿ ಶ 1682 – 1769
    ಜನ್ಮ ಸ್ಥಳ : ಬೂದಿನ್ನಿ
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ಶ್ರೀ ಮನೋಹರವಿಠ್ಠಲ
    ಪದ -5
    ಚರಿತ್ರೆ :
  7. ಅನಂತಕಥಾ
  8. ರಾಘವೇಂದ್ರ ಸ್ತೋತ್ರ [ ಕನ್ನಡ ಷಟ್ಪದಿಯಲ್ಲಿ ]
  9. ಶ್ರೀ ವಾಯುಸ್ತುತಿ [ ವೃತ್ತನಾಮ ]
  10. ಅಣು ಶ್ರೀ ರಾಘವೇಂದ್ರ ವಿಜಯ [ ೧ ಪದ್ಯ ]
  11. ಶ್ರೀ ದಾಮೋದರದಾಸರು
    ಕಾಲ : ಕ್ರಿ ಶ 1748 – 1780
    ತಂದೆ : ಶ್ರೀ ಜಗನ್ನಾಥದಾಸರು
    jಜನ್ಮ ಸ್ಥಳ : ಮಾನವಿ
    ಅಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ತಂದೆ ಶ್ರೀ ಜಗನ್ನಾಥವಿಠ್ಠಲ
    ಪದ -1
  12. ಶ್ರೀ ವೈರಾಗ್ಯಶಾಲಿ ತಮ್ಮಣ್ಣದಾಸರು –
    ಕಾಲ : ಕ್ರಿ ಶ 1730 – 1815
    ಜನ್ಮ ಸ್ಥಳ : ಕಲ್ಲೂರು
    ಉಪದೇಶ ಗುರುಗಳು : ಶ್ರೀ ವ್ಯಾಸವಿಠ್ಠಲ
    ಅಂಕಿತ : ಶ್ರೀ ರಘುಪತಿ ವಿಠ್ಠಲ
    ಪದ – 2
    ಸುಳಾದಿ – 22
    ಗ್ರಂಥ – 1 [ ಆಧ್ಯಾತ್ಮಮಾಲಾ ]
  13. ಶ್ರೀ ತಿರುಮಲ ದಾಸರು
    ಕಾಲ : ಕ್ರಿ ಶ 1715 – 1800
    ಜನ್ಮ ಸ್ಥಳ : ಸೋಮಪುರ
    ಉಪದೇಶ ಗುರುಗಳು : ಶ್ರೀ ಗುರುಗೋವಿಂದವಿಠ್ಠಲ
    ಅಂಕಿತ : ಶ್ರೀ ಜನಾರ್ದನ ವಿಠ್ಠಲ
    ಪದ : 115
  14. ಶ್ರೀ ಪ್ರೇಮದಾಸರು
    ಕಾಲ : ಕ್ರಿ ಶ 1742 – 1822
    ಜನ್ಮ ಸ್ಥಳ : ಸೋಮಪುರ
    ಉಪದೇಶ ಗುರುಗಳು : ಶ್ರೀ ಜನಾರ್ದನ ವಿಠ್ಠಲ
    ಅಂಕಿತ : ಶ್ರೀ ಅಭಿನವ ಜನಾರ್ದನವಿಠ್ಠಲ
    ಪದ – 82
    ಸುಳಾದಿ – 9
    ರಾಮಾಯಣ
  15. ಶ್ರೀ ವೆಂಕಟದಾಸರು –
    ಕಾಲ : ಕ್ರಿ ಶ 1775 – 1860
    ಜನ್ಮ ಸ್ಥಳ : ಲಂಗಸೂಗೂರು
    ಉಪದೇಶ ಗುರುಗಳು : ಶ್ರೀ ಪ್ರಾಣೇಶದಾಸರು
    ಅಂಕಿತ : ಶ್ರೀ ಗುರು ಪ್ರಾಣೇಶವಿಠ್ಠಲ
    ಪದ – 18
  16. ಶ್ರೀ ಶ್ರೀ ರಾಮದಾಸರು –
    ಕಾಲ : ಕ್ರಿ ಶ 1815 – 1892
    ಜನ್ಮ ಸ್ಥಳ : ಲಿಂಗಸೂಗೂರ
    ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶದಾಸರು
    ಅಂಕಿತ : ಶ್ರೀ ಶ್ರೀಶ ಪ್ರಾಣೇಶವಿಠ್ಠಲ
    ಪದ -24
  17. ಶ್ರೀ ಕುಲಕರ್ಣಿ ವೆಂಕಪ್ಪನವರು
    ಕಾಲ ; ಕ್ರಿ ಶ
    ಜನ್ಮ ಸ್ಥಳ : ಗೋರೆಬಾಳು
    ಉಪದೇಶ ಗುರುಗಳು : ಶ್ರೀ ಶ್ರೀಶ ಪ್ರಾಣೇಶ ವಿಠ್ಠಲ
    ಅಂಕಿತ : ಶ್ರೀ ಗುರು ಶ್ರೀಶ ಪ್ರಾಣೇಶವಿಠ್ಠಲ
    ಪದ – 51
    ಸುಳಾದಿ : 1
  18. ಶ್ರೀ ಏರಿ ಶೇಷಾಚಾರ್ಯ
    ಕಾಲ : ಕ್ರಿ ಶ
    ಜನ್ಮ ಸ್ಥಳ : ಚಿಂತಾಮಣಿ
    ಅಂಕಿತ : ಏರಿ ವೆಂಕಟೇಶ
    ಪದ – 1 [ ಶ್ರೀ ಶ್ರೀನಿವಾಸ ಕಲ್ಯಾಣ ಪದ್ಯ ರೂಪ ]
  19. ಶ್ರೀ ರಾಮಣ್ಣನವರು
    ಕ್ರಿ ಶ :
    ಜನ್ಮ ಸ್ಥಳ : ಕಲ್ಲೂರು
    ಉಪದೇಶ ಗುರುಗಳು : ಶ್ರೀ ವೇಣುಗೋಪಾಲದಾಸರು
    ಅಂಕಿತ : ಶ್ರೀ ರಾಮಚಂದ್ರ ವಿಠ್ಠಲ
    ಪದ – 2
    ಸುಳಾದಿ – 11

21 ಶ್ರೀ ಶ್ರೀ ಕುಂಟೋಜಿ ನರಸಿಂಹದಾಸರು
ಕಾಲ : 1740 – 1846
ಜನ್ಮ ಸ್ಥಳ : ಕುಂಟೋಜಿ
ಉಪದೇಶ ಗುರುಗಳು : ಶ್ರೀ ಶ್ರೀಶ ವಿಠ್ಠಲ
ಅಂಕಿತ : ಶ್ರೀ ಗುರು ಶ್ರೀಶವಿಠ್ಠಲ
ಪದ – 31
ಸುಳಾದಿ – 4

  1. ಶ್ರೀ ಸುರಪುರದ ಆನಂದದಾಸರು
    ಕಾಲ :
    ಜನ್ಮ ಸ್ಥಳ : ಚೀಕಲಪರವಿ
    ಉಪದೇಶ ಗುರುಗಳು : ಶ್ರೀ ಶ್ರೀಶವಿಠ್ಠಲ
    ಅಂಕಿತ : ಶ್ರೀ ಕಮಲೇಶವಿಠ್ಠಲ
    ಪದ – 114
    ಸುಳಾದಿ – 7
    ಕಾವ್ಯ ಗ್ರಂಥ : ರಾಮಾಯಣ – ಶ್ರೀಮದ್ಭಗವದ್ಗೀತೆ – ಶ್ರೀ ಕೃಷ್ಣಕಥಾಮೃತ
  2. ಗದ್ವಾಲಿ ದಾಸರು
    ಕಾಲ : ಕ್ರಿ ಶ 1798 – 1870
    ಜನ ಸ್ಥಳ : ಗದ್ವಾಲ್ – ಆಂಧ್ರಪ್ರದೇಶ
    ಉಪದೇಶ ಗುರುಗಳು : ಶ್ರೀ ಭೂವರಾಹ ರಘುಪತೋ ವಿಠ್ಠಲ
    ಅಂಕಿತ : ಶ್ರೀ ಶ್ರೀಪತಿವಿಠ್ಠಲ
    ಪದ – 35
    ಸುಳಾದಿ – 3
  3. ಶ್ರೀ ವೆಂಕಟೇಶದಾಸರು –
    ಕಾಲ : ಕ್ರಿ ಶ 1800 – 1890
    ಜನ್ಮ ಸ್ಥಳ : ಗದ್ವಾಲ್ :
    ಅಪದೇಶ ಗುರುಗಳು : ಶ್ರೀ ಶ್ರೀಪತಿವಿಠ್ಠಲ
    ಅಂಕಿತ : ಶ್ರೀ ತಂದೆ ಶ್ರೀಪತಿವಿಠ್ಠಲ
    ಪದ – 27
    ಸುಳಾದಿ – 1
  4. ಶ್ರೀ ಮೊದಲಕಲ್ಲು ಶೇಷದಾಸರು –
    ಕಾಲ : ಕ್ರಿ ಶ 1801 – 1885
    ಜನ್ಮ ಸ್ಥಳ : ದರೂರು [ ಗದ್ವಾಲ್ ಸಂಸ್ಥಾನ ]
    ಉಪದೇಶ ಗುರುಗಳು : ಶ್ರೀ ವಿಜಯದಾಸರಿಂದ ಸ್ವಪ್ನಾಂಕಿತ
    ಅಂಕಿತ : ಶ್ರೀ ಗುರು ವಿಜಯವಿಠ್ಠಲ
    ಪದ – 24
    ಸುಳಾದಿ – 5
    ಉಗಾಭೋಗ – 15
    ಶ್ರೀ ಗಾಯತ್ರೀಮಂತ್ರಸಾರ [ ಚಿತ್ರದೊಂದಿದೆ ವಿಶ್ಲೇಷಣೆ ] ಶ್ರೀಮದ್ಭಗವದ್ಗೀತಾ
  5. ಶ್ರೀ ಸ್ವಾಮಿರಾಯಾಚಾರ್ಯರು
    ಕಾಲ : ಕ್ರಿ ಶ 1836 – 1918
    ಜನ್ಮ ಸ್ಥಳ : ಕೋಸಗಿ – ಆಂಧ್ರಪ್ರದೇಶ
    ಉಪದೇಶ ಗುರುಗಳು : ಶ್ರ ಪೆತ್ತತಂದೆ ಗೋಪಾಲವಿಠ್ಠಲ
    ಅಂಕಿತ : ಶ್ರೀ ಗುರು ಜಗನ್ನಾಥದಾಸರು
    ಪದ – 140
    ಸುಳಾದಿ : 5
    ಸಂಸೃತ : 15
    ಕನ್ನಡಲ್ಲಿ – ಶ್ರೀಮದ್ರಾಮಾಯಣ, ಶ್ರೀ ವೆಂಕಟೇಶ ಹಾಗೂ ಶ್ರೀ ಮಹಾಲಕ್ಷ್ಮೀ ಸ್ಥವರಾಜ, – ಶ್ರೀಮದ್ ಹರಿಕಥಾಮೃತಸಾರದ ಕೆಲವು ಸಂಧಿಗಳಿಗೆ ವ್ಯಾಖ್ಯಾನ
  6. ಶ್ರೀ ದಾಸಾಚಾರ್ಯರು
    ಕಾಲ : ಕ್ರಿ ಶ 1780 – 1865
    ಜನ್ಮ ಸ್ಥಳ : ಕೆಂಭಾವಿ
    ಉಪದೇಶ ಗುರುಗಳು : ಶ್ರೀ ರಘುಪತಿ ವಿಠ್ಠಲ
    ಅಂಕಿತ :
    ಶ್ರೀ ಶ್ರೀನಿವಾಸ ಭೂವರಾಹ ರಘುಪತಿ ವಿಠಲ
  7. ಶ್ರೀ ಲಕ್ಷ್ಮೀಶರಾಯರು
    ಕಾಲ : ಕ್ರಿ ಶ 1750 – 1832
    ಜನ್ಮ ಸ್ಥಳ : ಲಿಂಗಸೂಗೂರು
    ಉಪದೇಶ ಗುರುಗಳು : ಶ್ರೀ ಪ್ರಾಣೇಶ ದಾಸರು
    ಅಂಕಿತ : ಶ್ರೀ ಲಕ್ಷ್ಮೀಶವಿಠ್ಠಲ
    ಪದ – 1
  8. ಶ್ರೀ ಸ್ವಾಮಿರಾಯರು
    ಕಾಲ : 1885 – 1918
    ಜನ್ಮ ಸ್ಥಳ : ಸಂತಿಕೆಲ್ಲೂರ್ / ಲಿಂಗಸೂಗೂರ
    ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥದಾಸರು
    ಅಂಕಿತ : ಶ್ರೀ ವರದೇಶವಿಠ್ಠಲ –
    ಪದ – 41
    ಚರಿತ್ರೆ – 3
    ಉಗಾಭೋಗ – 1

30 ಶ್ರೀ ವೆಂಕಟೇಶ ಹಳ್ಳಿರಾವ
ಕಾಲ : ಕ್ರಿ ಶ 1886 – 1960
ಉಪದೇಶ ಗುರುಗಳು – ಶ್ರೀ ಗುರುಜಗನ್ನಾಥ ದಾಸರು
ಅಂಕಿತ : ಶ್ರೀ ವರದೇಂದ್ರ ವಿಠ್ಠಲ
ಪದ – 5

  1. ಶ್ರೀ ಕರಣಂ ಹನುಮಂತರಾಯರು
    ಕಾಲ :
    ಜನ್ಮ ಸ್ಥಳ : ಕೌತಾಳಂ
    ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥ ದಾಸರು
    ಅಂಕಿತ : ಶ್ರೀ ವರದ ವಿಠ್ಠಲ
    ಪದ – 150 ಕ್ಕೂ ಅಧಿಕ.

32 ಶ್ರೀ ರಾಮರಾವ್ ಕುಲಕರ್ಣಿ
ಕಾಲ : ಕ್ರಿ ಶ – 1869 – 1917
ಅಂಕಿತ : ಶ್ರೀ ಆನಂದವಿಠ್ಠಲ
ಪದ – 5

33.ಶ್ರೀ ಶ್ರೀ ಗೋರೆಬಾಳ ಹನುಮಂತರಾಯರು
ಕಾಲ : ಕ್ರಿ ಶ 1893 – 1969
ಜನ್ಮ ಸ್ಥಳ : ಗೋರೆಬಾಳು
ಉಪದೇಶ ಗುರುಗಳು : ಶ್ರೀ ಗುರು ಜಗನ್ನಾಥ ದಾಸರು
ಅಂಕಿತ : ಶ್ರೀ ಸುಂದರವಿಠ್ಠಲ
ಪದ – 5
ಸುಳಾದಿ – 13
ಉಗಾಭೋಗ – 1

  1. ಶ್ರೀ ಅಸ್ಕಿಹಾಳ ಗೋವಿಂದದಾಸರು
    ಕಾಲ : ಕ್ರಿ ಶ 1856 – 1940
    ಜನ್ಮ ಸ್ಥಳ : ಅಸ್ಕಿಹಾಳ
    ಉಪದೇಶ ಗುರುಗಳು : ಶ್ರೀ ರಘುಪತಿವಿಠ್ಠಲ
    ಅಂಕಿತ : ಶ್ರೀ ಸಿರಿ ಗೋವಿಂದವಿಠ್ಠಲ / ಶ್ರೀ ಗೋವಿಂದವಿಠ್ಠಲ
    ಪದ –
  2. ಶ್ರೀ ಗುಂಡಾಚಾರ್ಯರು
    ಕಾಲ : ಕ್ರಿ ಶ 1896 – 1956
    ಜನ್ಮ ಸ್ಥಳ : ಕುರುಡಿ / ಬಲ್ಲಟಗಿ
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರ ಸ್ವಪ್ನಾಂಕಿತ
    ಅಂಕಿತ : ಶ್ರೀ ಶ್ಯಾಮಸುಂದರ ದಾಸರು
  3. ಶ್ರೀ ರಾಘವೇಂದ್ರದಾಸರು
    ಕಾಲ :
    ಜನ್ಮಸ್ಥಳ ದೊಡ್ಡಬಳ್ಳಾಪುರ
    ಉಪದೇಶ ಗುರುಗಳು : ಶ್ರೀ ವರ ವಿಠ್ಠಲ
    ಪದ –
  4. ಶ್ರೀ ಪರಮಪ್ರಿಯ ಸುಬ್ಬರಾಯದಾಸರು
    ಕಾಲ : ಕ್ರಿ ಶ
    ಜನ್ಮ ಸ್ಥಳ :
    ಉಪದೇಶ ಗುರುಗಳು : ಶ್ರೀ ಮುದ್ದು ಮೋಹನ ದಾಸರು
    ಅಂಕಿತ : ಶ್ರೀ ತಂದೆ ಮುದ್ದು ಮೋಹನವಿಠ್ಠಲ
    ಪದ :
  5. ಶ್ರೀ ಚಿಕ್ಕೇರಹಳ್ಳಿ ತಮ್ಮನ್ನ ದಾಸರು
    ಕಾಲ : ಕ್ರಿ ಶ
    ಜನ್ಮಸ್ಥಳ : ಚಿಕ್ಕೇರಹಳ್ಳಿ
    ಉಪದೇಶ ಗುರುಗಳು : ಶ್ರೀ ಮೋಹನದಾಸರು
    ಅಂಕಿತ : ಶ್ರೀ ಮಧ್ವಪತಿ ವಿಠ್ಠಲ
    ಪದ – 4

39.ಶ್ರೀ ಕುರಡಿ ರಾಘವೇಂದ್ರಾಚಾರ್ಯ
ಕಾಲ : ಕ್ರಿ ಶ
ಜನ್ಮ ಸ್ಥಳ : ಕುರುಡಿ
ಉಪದೇಶ ಗುರುಗಳು : ಶ್ರೀ ಪಂಚಮುಖಿ ಪ್ರಾಣದೇವರ ಪ್ರಸಾದಾಂಕಿತ
ಅಂಕಿತ : ಶ್ರೀ ಲಕುಮೀಶ

40 ಶ್ರೀ ಶ್ರೀನಿವಾಸರಾಯರು
ಕಾಲ : ಕ್ರಿ ಶ 1871 – 1964
ಜನ್ಮ ಸ್ಥಳ : ಶಿವಮೊಗ್ಗ
ಉಪದೇಶ ಗುರುಗಳು : ಶ್ರೀ ತಂದೆ ಮುದ್ದು ಮೋಹನ ದಾಸರು
ಅಂಕಿತ : ಶ್ರೀ ಉರಗಾದ್ರಿ ವಾಸ ವಿಠ್ಠಲ

  1. ಶ್ರೀ ಎಂ ಆರ್ ಗೋವಿಂದರಾವ್
    ಕಾಲ : ಕ್ರಿ ಶ 1884 – 1983
    ಜನ್ಮ ಸ್ಥಳ : ಚಿಕ್ಕಮಗಳೂರು
    ಉಪದೇಶ ಗುರುಗಳು : ಶ್ರೀ ತಂದೆ ಮುದ್ದು ಮೋಹನ ದಾಸರು
    ಅಂಕಿತ : ಶ್ರೀ ಗುರು ಗೋವಿಂದವಿಠ್ಠಲ
  2. ಶ್ರೀ ಆರ್ ರಾಮಚಂದ್ರರಾವ್
    ಕಾಲ : ಕ್ರಿ ಶ 1907 – 1982
    ಜನ್ಮ ಸ್ಥಳ : ಚಿತ್ರದುರ್ಗ
    ಉಪದೇಶ ಗುರುಗಳು : ಶ್ರೀ ಉರಗಾದ್ರಿವಾಸ ವಿಠ್ಠಲ
    ಅಂಕಿತ : ಶ್ರೀ ತಂದೆ ವೆಂಕಟೇಶ ವಿಠ್ಠಲ –
  3. ಶ್ರೀ ಚಿಪ್ಪಗಿರಿ ವೆಂಕಟದಾಸರು
    ಕ್ರಿ ಶ :
    ತಂದೆ : ಶ್ರೀ ಮೋಹನದಾಸರು
    ಜನ್ಮ ಸ್ಥಳ : ಚಿಪ್ಪಗಿರಿ
    ಉಪದೇಶ ಗುರುಗಳು : ಶ್ರೀ ಗುರು ಮಧ್ವಪತಿ ವಿಠ್ಠಲ
    ಪದ – 1
  4. ಶ್ರೀ ಶ್ರೀ ನಾಡೀಗ ತಿಮ್ಮಪ್ಪದಾಸರು
    ಕಾಲ : ಕ್ರಿ ಶ 1745 – 1822
    ಜನ್ಮ ಸ್ಥಳ : ಮಾನವಿ
    ಉಪದೇಶ ಗುರುಗಳು : ಶ್ರೀ ಜಗನ್ನಾಥದಾಸರು
    ಅಂಕಿತ : ಶ್ರೀ ಜ್ಞಾನಮಯ ವಿಠ್ಠಲ
    ಪದ – 1
  5. ಶ್ರೀ ರಾಘಪ್ಪದಾಸರು
    ಕಾಲ : ಕ್ರಿ ಶ 1820 – 1906
    ಜನ್ಮ ಸ್ಥಳ : ಲಿಂಗಸೂಗೂರ
    ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶವಿಠ್ಠಲ
    ಅಂಕಿತ : ಶ್ರೀ ಮೋದ ವಿಠ್ಠಲ
    ಪದ – 14
  6. ಶ್ರೀ ರಾಘವಾರ್ಯ ಒಡೆಯರು
    ಕಾಲ : ಕ್ರಿ ಶ 1829 – 1904
    ಜನ್ಮ ಸ್ಥಳ : ಕುಷ್ಟಗಿ
    ಉಪದೇಶ ಗುರುಗಳು : ಕೊಪ್ಪ ಶ್ರೀ ಪ್ರಾಣದೇವರ ವರ ಪ್ರಸಾದಾಂಕಿತ
    ಅಂಕಿತ : ಶ್ರೀ ನಡುಪುರೇಶ
    ಪದ – 16
  7. ಶ್ರೀ ಜಯವೆಂಕಟಾಚಾರ್ಯರು
    ಕಾಲ : ಕ್ರಿ ಶ 1846 – 1926
    ಜನ್ಮ ಸ್ಥಳ : ಕನಕಗಿರಿ
    ಉಪದೇಶ ಗುರುಗಳು :
    ನವಲಿ ಶ್ರೀ ಕನಕಗಿರಿ ಮುಖ್ಯಪ್ರಾದೇವರ ವರ ಪ್ರಸಾದಂಕಿತ
    ಅಂಕಿತ : ಶ್ರೀ ಜಯ ವೆಂಕಟೇಶ
    ಪದ – 1 [ ನವಲಿ ಶ್ರೀ ಭೋಗಾಪುರೇಶ ಮುಖ್ಯ ಪ್ರಾಣದೇವರ ಕರಾವಲಂಬನ ಸ್ತೋತ್ರ ]
  8. ಶ್ರೀ ಸಿಂಗಪ್ಪಪಟವಾರಿ ದಾಸರು
    ಕಾಲ : ಕ್ರಿ ಶ 1850 – 1910
    ಜನ್ಮ ಸ್ಥಳ : ಗೋರ್ಕಲ್ಲು
    ಉಪದೇಶ ಗುರುಗಳು : ಶ್ರೀ ವೆಂಕಟೇಶದೇವರ ವರ ಪ್ರಸಾದಾಂಕಿತ
    ಅಂಕಿತ : ಶ್ರೀ ಶೀಶ

ರಚನೆಗಳು :

  1. ಶ್ರೀ ರಾಮ ಭಜನಾಮೃತ ಶತಾಷ್ಟಕ
  2. ಶ್ರೀಮದ್ಭಾಗವತದ ಶ್ರೀ ಕೃಷ್ಟಾವತಾರ ಲೀಲೆ
  3. ಶ್ರೀ ದತ್ತಾತ್ರೇಯ ಅವರಾತ
  4. ಶ್ರೀ ವೆಂಕಟೇಶದೇವರ ಅವತಾರ
  5. ಚಂದ್ರಹಾಸ ಚರಿತೆ ಬಯಲಾಟ

.

  1. ಶ್ರೀ ಮದ್ದಿಕೇರಿ ಭೀಮರಾಯರು
    ಕಾಲ : ಕ್ರಿ ಶ 1815 – 1911
    ಜನ್ಮ ಸ್ಥಳ : ಗಂಗಾವತಿ
    ಉಪದೇಶ ಗುರುಗಳು : ಶ್ರೀ ಗುರು ಪ್ರಾಣೇಶದಾಸರು
    ಅಂಕಿತ : ಸುಖದ ಸುಂದರ ವಿಠ್ಠಲ
    ಪದ – 5
    ಸುಳಾದಿ – 1
  2. ಶ್ರೀ ಭೀಮಸೇನಾಚಾರ್ಯರು
    ಕಾಲ : ಕ್ರಿ ಶ 1854 – 1934
    ಜನ್ಮ ಸ್ಥಳ : ಸಿಂಗನೋಡಿ
    ಅಂಕಿತ : ಶ್ರೀ ರಂಗನಾಥದೇವರ ವರಪ್ರಸಾದಾಂಕಿತ ” ಶ್ರೀ ವರಬಂಡೇ ರಂಗವಿಠ್ಠಲ “-
    ರಚನೆ :
    ಅನೇಕ ಪದಗಳು ಹಾಗೂ ಬಯಲಾಟಗಳು ರಚಿಸಿದ್ದಾರೆ.
    ಸಿಂಗನೋಡಿ – ಚಂದ್ರಬಂಡ – ನಂದಿನ್ನಿ ಸುತ್ತಮುತ್ತಲಿನ ಗ್ರಾಮದ ಕುರುಬ ಜನಾಂಗದವರ ಬಾಯಲ್ಲಿ ಇವರ ಹಾಡುಗಳು ಕೇಳಿಬರುತ್ತವೆ.
    ” ಶಬರ ಶಂಕರ ವಿಳಾಸ ” ಬಯಲಾಟ ಮಾತ್ರ ಮುದ್ರಿತವಾಗಿದೆ ಹಾಗೂ ಪ್ರದರ್ಶನವಾಗುತ್ತಿದೆ.
  3. ಶ್ರೀ ಗೊಂಬೀ ಸೀನಪ್ಪ
    ಕಾಲ : ಕ್ರಿ ಶ 1800 – 1860
    ಜನ್ಮ ಸ್ಥಳ : ಕಿನ್ನಾಳ
    ಅಂಕಿತ :
    ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ಶ್ರೀ ಕದರಮಂಡಲಗಿ ಪಾಂಡುರಂಗ –
    ಪದ – 50
    ಇವರ ಕೀರ್ತನೆಗಳೆಲ್ಲವೂ ಭಾವ ಸಂಭ್ರಮದಿಂದ ತುಂಬಿ ತುಳುಕುತ್ತಿದ್ದ ಮಧುರ ಮನೋಹರವಾದ ಮುಕ್ತಕಗಳಂತೆ ತೋರುತ್ತವೆ – ಅಲ್ಲದೇ ಇವರ ಕೀರ್ತನೆಗಳೆಲ್ಲವೂ ಸರಸ ಸುಂದರವಾಗಿದ್ದು ಅತ್ಯಂತ ತಿಟ್ಟಾಗಿರುವವು – ಆದುದರಿಂದಲೇ :
    ” ಕನಕದಾಸರ ಗುಟ್ಟು – ಶ್ರೀನಿವಾಸದಸರ ತಿಟ್ಟು ” ಎನ್ನುವ ಮಾತು ಶ್ರೀ ಹರಿದಾಸ ಪಂಥದಲ್ಲಿ ರೂಢಿಯಾಗಿದೆ.
  4. ಶ್ರೀ ಸಿಂಗರಾಚಾರ್ಯರು
    ಕಾಲ : ಕ್ರಿ ಶ 1873 – 1950
    ಜನ್ಮ ಸ್ಥಳ : ಕನಕಗಿರಿ
    ಅಂಕಿತ : ಶ್ರೀ ಕನಕಗಿರಿ ನೃಸಿಂದದೇವರ ವರ ಪ್ರಸಾದಾಂಕಿತ ” ಶ್ರೀ ಸಿಂಗರಿ “
    ಇವರು ” ಶ್ರೀ ಸಿಂಗರಿ ” ಅಂಕಿತದಲ್ಲಿ ಅನೇಕ ಪದ – ಪದ್ಯ – ಲಾವಣಿಗಳು ರಚಿಸಿದ್ದು ಅದರಲ್ಲಿ ೫೦ ಮಾತ್ರ.

53 ಶ್ರೀ ಶ್ರೀ ಸುಬ್ಬಣ್ಣಾಚಾರ್ಯರು
ಕಾಲ : ಕ್ರಿ ಶ 1800 – 1885
ಜನ್ಮ ಸ್ಥಳ : ಸುರಪುರ
ಅಂಕಿತ :
ಮುದೇನೂರು ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ” – ಶ್ರೀ ಗೋಪತಿ ಕೃಷ್ಣ ವಿಠ್ಠಲ “
ಇವರು ಸುಮಾರು ೫೦ ಪದ – ಪದ್ಯಗಳನ್ನು ರಚಿಸಿದ್ದು ತತ್ತ್ವ ಪ್ರಮೇಯಗೊಂದಿಗೆ ಭಕ್ತ ಹೃದಯದ ಆರ್ತತೆಯೂ ಇವರ ಪದ – ಪದ್ಯಗಳಲ್ಲಿ ಹೊರಹೊಮ್ಮಿವೆ.

54 ಶ್ರೀ ಕಟ್ಟ್ಯಾಚಾರ್ಯ ಜೋಶಿ
ಕಾಲ : ಕ್ರಿ ಶ 1880 – 1976
ಜನ್ಮ ಸ್ಥಳ : ಪಾಮನಕೆಲ್ಲೂರು
ಅಂಕಿತ :
ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸ್ವಪ್ನಾಂಕಿತ ” ನರಸಿಂಹವಿಠ್ಠಲ ” ಅಂಕಿತದಲ್ಲಿ ಅನೇಕ ಪದ – ಪದ್ಯಗಳನ್ನು ರಚನೆ ಮಾಡಿದ್ದಾರೆ. :

  1. ಶ್ರೀ ಕೃಷ್ಣಲೀಲೆ
  2. ಶ್ರೀ ಗಣಪತಿಯಿಂದ ಮೊದಲು ಮಾಡಿ ಶ್ರೀ ಹರಿ ಸ್ತುತಿ ಹಾಗೂ ದಶಾವತಾರ ಪದಗಳು
  3. ಮಗಳಾರತಿ ಹಾಗೂ ಆಶೀರ್ವಾದ ಪದಗಳು
  4. ಲಾವಣಿ [ ಎಲೆ ಅಡಿಕೆ ಸುಣ್ಣದ ಜಗಳ ಹಾಗೂ ಕ್ವಾನಮ್ಮನ ಹಾಡುಗಳು ]

55 ಶ್ರೀ ಗುರುಮಧ್ವಚಾರ್ಯರು
ಕಾಲ : ಕ್ರಿ ಶ 1882 – 1962
ಜನ್ಮ ಸ್ಥಳ : ಗಂಗಾವತಿ
ಅಂಕಿತ : ಶ್ರೀ ಭೋಗಾಪುರೇಶ ವರಪ್ರಸಾದಾಂಕಿತ ” ಶ್ರೀ ಗುರುಮಧ್ವ “
ಇವರು ಅನೇಕ ಪದ ಪದ್ಯಗಳನ್ನು ರಚಿಸಿದ್ದಾರೆ!

madhwamrutha

Tenets of Madhwa Shastra

You may also like...

1 Response

  1. ಗೋವರ್ಧನ says:

    ಅಮೋಘ, ಬಹಳ ಶ್ರಮ ಪಟ್ಟು ದಾಸ varenyara ಮಾಹಿತಿ ಕೊಟ್ಟಿದ್ದೀರಿ. ವಂದನ ಸಹಸ್ರಗಳು

Leave a Reply

Your email address will not be published. Required fields are marked *